ಸಸಿಮಡಿಯಲ್ಲಿ ರೋಗ ಮತ್ತು ಕೀಟಭಾದೆ ತಡೆಯುವ ಕ್ರಮಗಳು :

ಕಾರ್ಬಂಡೇಜಿಮ್ + ಮ್ಯಾಂಕೋಜಬ್ (ಸ್ಪ್ರಿಂಟ್/ಸಾಫ್) 2.5 ಗ್ರಾಂ ಪ್ರತಿ ಲೀಟ‌ರ್ ದ್ರಾವಣವನ್ನು ತಿಂಗಳಿಗೊಮ್ಮೆಯಂತೆ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.

ರೋಗ ಮತ್ತು ಕೀಟಗಳನ್ನು ಹತೋಟಿಯಲ್ಲಿ ಇಡಲು ಒಣಗಿದ ಕುಡಿಗಳನ್ನು ತೆಗೆದು ಸಸಿಮಡಿಯನ್ನು ಸ್ವಚ್ಛವಾಗಿ ಇಟ್ಟಿರುವುದು ಅವಶ್ಯಕ.

ತಿಂಗಳಿಗೊಮ್ಮೆ ಕ್ಲೋರ್ ಪೈರಿಫಾಸ್ 50%+ ಸೈಪರ ಮೆಥಿನ್ 5%  ಕೀಟನಾಶಕವನ್ನು 1.5 ಮಿಲಿ ಪ್ರತಿ ಲೀಟರ್ ದ್ರಾವಣವನ್ನು ಸಿಂಪಡಿಸುವುದು.

ಮೇ ತಿಂಗಳಿನಲ್ಲಿ ಹೂಮಿಕ್ ಆಸಿಡ್ 2 ಮಿಲಿ ದ್ರಾವಣವನ್ನು ಒಮ್ಮೆ ಸಿಂಪಡಿಸುವುದು.

ತಿಂಗಳಿಗೊಮ್ಮೆ ಬಯೋ-20 (3 ಮಿಲಿ/ಲೀ) ಅಥವಾ ಎರೆಜಲ (ಒಂದು ಭಾಗಕ್ಕೆ 4 ಭಾಗ ನೀರು ಸೇರಿಸಿದ ದ್ರಾವಣ) ಸಿಂಪಡಿಸು ವುದು.

ಬಳ್ಳಿಯ ರೋಗ ಮತ್ತು ಕೀಟ ನಿರ್ವಹಣೆ :

ಬುಡ ಕೊಳೆ ರೋಗ (ಕಟ್ಟೆ ರೋಗದ ನಿರ್ವಹಣೆ ):

ಮೇ ಕೊನೇ ವಾರದಲ್ಲಿ ಕಾಪರ್ ಆಕ್ಸಿ ಕ್ಲೋರೈಡ್ (ಬೈಟೋಕ್ಸ್) 5 ಗ್ರಾಂ/ಲೀ ನೀರಿನಲ್ಲಿ ಬೆರೆಸಿ 3-5 ಲೀ ದ್ರಾವಣವನ್ನು ಬುಡದ ಸುತ್ತಲೂ ನೆನೆಸುವುದು ಅಥವಾ ಟ್ರೈಕೋಡರ್ಮಾ ಮತ್ತು ಸುಡೋಮೊನಾಸ್‌ನ್ನು ಬುಡಕ್ಕೆ ಹಾಕುವುದು.

ಜೂನ್ ಮೊದಲನೇ ವಾರದಲ್ಲಿ ಪೊಟ್ಯಾಶಿಯಂ ಫಾಸ್ಪೋನೇಟ್ (4 ಮಿಲಿ/ಲೀ.) ದ್ರಾವಣ ಸಿಂಪರಣೆ ಹಾಗೂ ಬುಡವನ್ನು ನೆನೆಸುವುದು.

ಜೂನ್-ಆಗಸ್ ಗಳಲ್ಲಿ ಬಳ್ಳಿಯ ಬುಡದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಸರಿಯಾಗಿಡುವುದು. ಈ ಬಳ್ಳಿಯ ಬುಡದಲ್ಲಿ ಹೆಚ್ಚು ದಪ್ಪಗಿನ ಮುಚ್ಚಿಗೆಯಿದ್ದಲ್ಲಿ ಅದನ್ನು ತೆಳುವಾಗಿ ಹರಡಬೇಕು.

ಮೆಣಸಿಗೆ ಬರುವ ಇತರೇ ಕಿಟಬಾಧೆಗಳು.

  1. ಎಲೆ ಅಂಚು ಮುರುಟುವುದು: ಇದು ಗಾಲ್ ನುಸಿಯಿಂದ ಬರುವ ರೋಗ
  2. ಹಿಟ್ಟು ತಿಗಣೆಯ ಬಾಧೆಯಿಂದ ಎಲೆ ಹಳದಿಯಾಗುವುದು.
  3. ತುದಿ ಕುಡಿ ಕೊರೆಯುವ ಕೀಟ.

ಇವುಗಳ ಹತೋಟಿಗಾಗಿ ರೋಗೊರ್ (2 ಮಿಲಿ/ಲೀ.) ಸಿಂಪರಣೆ ಮಾಡುವುದು ಮತ್ತು ಮೂರು ವಾರಗಳ ನಂತರ ಇನ್ನೊಮ್ಮೆ ಸಿಂಪಡಿಸುವುದು.



ಮುಖಪುಟ .... ಹಿಂದೆ ಹೋಗಿ